Slide
Slide
Slide
previous arrow
next arrow

ರಸ್ತೆ ಕುಸಿತ; ಸೂರಿಮನೆಗೆ ಸಂಪರ್ಕ ಕಡಿತ

300x250 AD

ಯಲ್ಲಾಪುರ: ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತುಡುಗುಣಿಯಿಂದ ಸೂರಿಮನೆಯನ್ನು ಸಂಪರ್ಕಿಸಬೇಕಾದ ರಸ್ತೆಯ ತುಡುಗುಣಿ ಬ್ರಿಜ್ಜಿನ ಬಳಿಯಲ್ಲಿ ರಸ್ತೆ ಸಂಪೂರ್ಣ ಕುಸಿತವಾಗಿದ್ದು, ಸೂರಿಮನೆ ಸಂಪೂರ್ಣವಾಗಿ ಕಡಿತಗೊಂಡಿದೆ.

300x250 AD

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ.ಸ್ಥಳೀಯ ಸದಸ್ಯರುಗಳಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ ಅವರುಗಳು ಸೂರಿಮನೆಗೆ ತಕ್ಷಣ ಸಂಪರ್ಕ ಸಾಧ್ಯವಾಗುವಂತೆ ಮಾಡಲು ಬದಲೀ ದಾರಿಯ ನಿರ್ಮಾಣಕ್ಕಾಗಿ ಪಂಚಾಯತದ ಸಹಕಾರದೊಂದಿಗೆ ಊರಿನವರ ಸಹಯೋಗದಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.

Share This
300x250 AD
300x250 AD
300x250 AD
Back to top